top of page

DARSHANAM

REVA UNIVERSITY

Friday, February 21, 2025

BENGALURU
SOURABHA 2025

ರಾಷ್ಟ್ರಕವಿ ಶ್ರೀ ಕುವೆಂಪು ವಿರಚಿತ ಮಹಾಕಾವ್ಯ ಜ್ಞಾನಪೀಠ ಪುರಸ್ಕೃತ ಕೃತಿ ಶ್ರೀರಾಮಾಯಣ ದರ್ಶನಂನ ಆಯ್ದಭಾಗದ ಪ್ರಸ್ತುತಿ 'ದರ್ಶನಂ' ದಶಕಗಳವರೆಗೂ ಶ್ರೀರಾಮನ ದರುಶನಕ್ಕಾಗೇ ಕಾದಿರುವ ಮಾತೆ ಶಬರಿ. ಈ ರಂಗಕೃತಿಯಲ್ಲಿ ಕೇವಲ ಒಬ್ಬಳು ಶಬರಿಯಿರದೇ ಭಕ್ತಿಪರಂಪರೆಯ ಪ್ರತಿನಿಧಿಗಳಂತೆ ಹಲವಾರು ಶಬರಿಯರು ಕಣ್ಮುಂದೆ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಶಬರಿಯ ಭಕ್ತಿಯ ಪರಾಕಾಷ್ಠೆಯಿದೆ, ಶ್ರೀರಾಮನ ಅಂತಃಕರಣದ ಒಲವು, ಲಕ್ಷ್ಮಣನ ಕರ್ತವ್ಯ ಪ್ರಜ್ಞೆ , ಸೀತೆಯ ರೋಧನೆ, ಚ‌ಂದ್ರನಖಿಯ ಆಕ್ರಂದನ, ರಾವಣನ ಆಕ್ರೋಷ, ಮಾರೀಚನ ಸತ್ಯಪರತೆ, ಜಟಾಯುವಿನ ಸ್ವಾಮಿನಿಷ್ಠೆ ಈ ಎಲ್ಲಾ ಸಂಗತಿಗಳು ಈ ರಂಗಕೃತಿಯಲ್ಲಿ ಶ್ರೀ ಕುವೆಂಪುರವರ ದರ್ಶನವಾಗಿ ಮೇಳೈಸಿದೆ. ಈ ರಂಗಕೃತಿಯು ವಿಭಿನ್ನ ಮಾದರಿಯ ನಟನೆ, ಕೂಡಿಯಾಟ್ಟಂ, ಮೋಹಿನಿಯಾಟ್ಟಂ, ಕಳರಿ ಮಂತಾದ ಸಾಂಪ್ರಾದಾಯಿಕ ಕಲೆಗಳನ್ನು ಅನ್ವಯಿಸಿಕೊಂಡು ಕಟ್ಟಿದ ಒಂದು ಕಲಾಕೃತಿಯಾಗಿದೆ. ಮಹಾಕವಿಯ ಮೇರುಕೃತಿಯ ದಿಗ್ದರ್ಶನವು ಸಹೃದಯಿ ಪ್ರೇಕ್ಷಕರನ್ನು ತಲುಪಲಿ ಎಂಬುದೇ ಇಡೀ ತಂಡದ ಆಶಯವಾಗಿದೆ

  • Facebook
  • Instagram
  • Youtube

© 2024 Rangasourabha | Kannada Theatre

bottom of page